Posts

Showing posts from June, 2018

"ಜಿನೇಂದ್ರ ಎಂ. ಎಂ".ರವರು ಪೇಂಟಿಂಗ್ ಮತ್ತು ರೇಖಾಚಿತ್ರಗಳ ಅವರದೇ ಆದ ಶೈಲಿಯನ್ನು ಬೆಳೆಸಿಕೊಂಡು ಬಂದ ಹಾದಿಯ ಹಿನ್ನೋಟ

ಸ್ನೇಹಿತರೇ,.               ಪ್ರಕೃತಿ ಚಿತ್ರ.ಸಮಕಾಲೀನ ಕಲಾಕೃತಿ ರೇಖಾಚಿತ್ರ. ಶಿಲ್ಪ ಕಲಾಕೃತಿ. ಮ್ಯೂರಲ್ ಗಳು. ಸೆಟ್ ವರ್ಕಗಳು ಕಲಾಕ್ಷೇತ್ರದ ಎಲ್ಲಾ ಆಯಮಗಳಲ್ಲೂ ಅವರ ಪಾಡಿಗೆ ಅವರು ಕೆಲಸ ಮಾಡುತ್ತಿರುವ " ಜಿನೇಂದ್ರ ಎಂ. ಎಂ"   ರವರು ಪೇಂಟಿಂಗ್ ಮತ್ತು ರೇಖಾಚಿತ್ರಗಳ ಅವರದೇ ಆದ ಶೈಲಿಯನ್ನು ಬೆಳೆಸಿಕೊಂಡು ಬಂದ ಹಾದಿಯ ಒಂದು ಸಣ್ಣ ಪರಿಚಯ..                                      2004-2005ರಲ್ಲಿ ಕಲಾ ಅಭ್ಯಾಸಕ್ಕಾಗಿ ಶಿವಮೊಗ್ಗಕ್ಕೆ ಬಂದ ಜಿನೇಂದ್ರವರು ನಿಧಾನವಾಗಿ ಕಲಾಕೃತಿಯ ರಚನೆಯಲ್ಲಿ ತೊಡಗಿಕೊಂಡರು. ಅಂದಿನಿಂದ ಇಂದಿನವರೆಗೂ ಹಲವಾರು ಸರಣಿ ಕಲಾಕೃತಿಗಳನ್ನು ರಚಿಸಿದ್ದಾರೆ. ಹಾಗೂ ರಚಿಸುತ್ತಲೇ ಇದ್ದಾರೆ..     ಆರಂಭದ ದಿನಗಳಲ್ಲಿ ಪ್ರಕೃತಿ ಚಿತ್ರಗಳತ್ತ ವಾಲಿದ ಅವರು ಶಿವಮೊಗ್ಗದ ಖ್ಯಾತ ಚಿತ್ರಕಲಾವಿಧ S.R ವೆಂಕಟೇಶ್ ರವರ ಮಾರ್ಗದರ್ಶನದಲ್ಲಿ ಹಲವಾರು ಪ್ರಕೃತಿ ಚಿತ್ರಗಳನ್ನು ರಚಿಸಿ ಅವರದ್ದೇ ಆದ ಶೈಲಿಯನ್ನು ಕಟ್ಟಿಕೊಳ್ಳುವುದರಲ್ಲಿ ಯಶಸ್ವಿ ಆದರೂ!. ಮುಂದಿನ ದಿನದಲ್ಲಿ ಅವರು ಪೋಶಿಸಿದಂತೆ ಕಂಡುಬಂದಿಲ್ಲ. ಮುಂದೆ ಬರುಬರುತ್ತಾ ರೇಖಾಚಿತ್ರಗಳನ್ನು ರಚಿಸುವುದರ ಜೊತೆಗೆ ಕೆಲವು ಸಮಕಾಲೀನ ವರ್ಣಚಿತ್ರಗಳನ್ನು ರಚಿಸಿದರು. ಆದರೆ ಇವರು ರೇಖಾಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟು ಒಂದು ಸರಣಿ ಕಲಾಕೃತಿಯನ್ನು ರಚಿಸಿ ಪ್ರದರ್ಶಿಸಿದರು. ಚಿತ್ರಕಲಾ ಪರಿಷತ್ ನಲ್ಲಿ ನಡೆದ ಈ ಪ್ರದರ್ಶನ ದಲ್ಲಿ 25ಕ್ಕ

ಸದಭಿರುಚಿಯ ಚಿಂತಕ ಜಿನೇಂದ್ರ ಎಂ ಎಂ ರವರ ದಾರ್ಮಿಕ ಕೆಲಸ ಕಾರ್ಯಗಳ ಒಂದು ಸಣ್ಣ ಪರಿಚಯ

Image
ಜಿನೇಂದ್ರ ಎಂ ಎಂ ಇವರ ಹೆಸರು ಕೇಳಿದರೆ ಕರ್ನಾಟಕದ ಜೖನ ಯುವ ಸಮುದಾಯ ಕ್ಕೆ ಚಿರಪರಿಚಿತರು. ಹಾಗಂತ ಇವರು ಯಾವ ಸೆಲಬ್ರಿಟಿಯೊ ಅಲ್ಲ ಸಾಮಾನ್ಯ ವ್ಯಕ್ತಿ ಅವರ ಕಲಾಚಟುವಟಿಕೆಯಿಂದ ಪರಿಚಿತರಾದರು. ಹೌದು ಹೇಳಿಕೊಳ್ಳದೆ ಅವರ ದೈನಂದಿನ ಕೆಲಸಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರ ಧರ್ಮಸೇವೆಯ ಸಣ್ಣದೂಂದು ಪರಿಚಯ.         ಮಂದಾರಗಿರಿಯಲ್ಲಿ ನಡೆದ ಜೈನ್ ಮಿಲನ್ ಸಮಾವೇಶ ದಲ್ಲಿ ಜಿನೇಂದ್ರ ಎಂ ಎಂ ರವರನ್ನು ಸನ್ಮಾನಿಸಲಾಯಿತು, ಈ ಸಂದರ್ಭ ದಲ್ಲಿ ತಾವೊಂದು ಮಿಲನ್ ಸ್ಥಾಪಿಸಬೇಕು ಅಂದು ಕೊಂಡಿದ್ದ ಅವರಿಗೆ ಕಮ್ಮಿ ಸಂಖ್ಯೆಯಲ್ಲಿದ್ದ ಆಗಿನ್ನೂ ಬೆಂಗಳೂರಿಗೆ ಬಂದ ಅವರ ಸ್ನೇಹಿತರನ್ನು ಸೇರಿಸಿಕೊಂಡು ಜೈನ್ ಮಿಲನ್ ಸ್ಥಾಪನೆಯ ಚರ್ಚೆ ನಡೆಸಿದರು. ಆದರೇ ಜೈನ್ ಮಿಲನ್ ನಲ್ಲಿ ಕನಿಷ್ಠ 15 ಜನ ಇರಬೇಕು ಎಂಬ ವಿಷಯ ತಿಳಿದು ಕೇವಲ 9 ಜನ ಇದ್ದ ಇವರ ತಂಡ ಪ್ರಚ್ಛನ್ನ ಎಂಬ ಜೈನ್ ಅಸೋಸಿಯೇಷನ್ ಸ್ಥಾಪಿಸಿ ಇವರ ಅಧ್ಯಕ್ಷತೆ ಯಲ್ಲಿ ಸತತ 4 ವರ್ಷ ರಾಜ್ಯ ಮಟ್ಟದ ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆ ಮಾಡಿ ಸೈ ಎನಿಸಿಕೊಂಡವರು. ನಂತರ ಸ್ನೇಹಿತರ ಬಳಗ ದೊಡ್ಡದಾದಂತೆ ಸುಹಾಸ್ತಿ ಎಂಬ ಹೆಸರಿನ ಯುವ ಜೈನ್ ಮಿಲನ್ ಒಂದನ್ನು ಸ್ಥಾಪಿಸಿ ರಾಜ್ಯ ಜೈನ  ಯುವ ಸಮುದಾಯ ದ ಗಮನ ಸೆಳೆದರು. ಮಹಾವೀರ ಜಯಂತಿ ಸಂದರ್ಭ ದಲ್ಲಿ ಇವರು ರಚಿಸಿರುವ ಟ್ಯಾಬ್ಲೂಗಳು ಆಗಾಗ online media ಗಳಲ್ಲಿ share ಆಗಿರುತ್ತದೆ. ಹೌದು ಇವರ ಸತತ ಆರೇಳು ವರ್ಷ ಗಳಿಂದ

ಚಿತ್ರ ಮತ್ತು ಶಿಲ್ಪಕಲಾವಿದರಾದ ಶ್ರೀ ಎಂ.ಎಂ.ಜಿನೇಂದ್ರ ಜೈನ್- ಬೆಂಗಳೂರು ಇವರ ಪರಿಚಯ

Image
ಚಿತ್ರ ಮತ್ತು ಶಿಲ್ಪಕಲಾವಿದರಾದ ಶ್ರೀ ಎಂ.ಎಂ.ಜಿನೇಂದ್ರ ಜೈನ್ - ಬೆಂಗಳೂರು ಇವರ ಪರಿಚಯ ಮಲೆನಾಡು ಪ್ರಾಂತ್ಯದ ಸಾಗರ ತಾಲ್ಲೂಕಿನ ಮಳ್ಳೋಡಿ ಗ್ರಾಮದ ಶ್ರೀ.ಮೇಘರಾಜ್ ಮತ್ತು ಶ್ರೀಮತಿ.ಲೀಲಾವತಿ ರವರ ಪುತ್ರರಾದ ಶ್ರೀ ಎಂ.ಎಂ.ಜಿನೇಂದ್ರ ಜೈನ್ ರವರಿಗೆ ಬಾಲ್ಯದಿಂದಲೂ ಚಿತ್ರ ಬರೆಯುವ, ಗೆರೆ ಎಳೆದಾಡುತ್ತಾ ಸುಂದರ ಚಿತ್ರ ಬರೆಯುವ ಅಭಿರುಚಿ ಇದ್ದಿತು. ಇವರ ಹುಟ್ಟಿದೂರಿನ ಪರಿಸರ ಪ್ರಕೃತಿಯು ಬಾಲ್ಯದಿಂದಲೇ ಮನಸ್ಸಿನಲ್ಲಿ ಚಿತ್ರಕಲಾಭಿವ್ಯಕ್ತಿಯನ್ನು ಮೊಳಕೆ ಯೂಡಿಸಿದ್ದವು.ಈಗಿನ ಇವರ ವರ್ಣಚಿತ್ರಗಳಲ್ಲಿ ಇವರ ಹುಟ್ಟಿದೂರಿನ ಪರಿಸರದ ಚಿತ್ರಣಗಳು ಮನಮೋಹಕವಾಗಿ ಬಂದಿವೆ. ಬಿ.ಎಫ್.ಎ.ಪದವಿ ವ್ಯಾಸಂಗಕ್ಕಾಗಿ ಶಿವಮೊಗ್ಗದ ಶ್ರೀವರ್ಧಮಾನ ವಿದ್ಯಾರ್ಥಿ ನಿಲಯದಲ್ಲಿದ್ದಾಗ ಇವರ ಚಿತ್ರಕಲಾ ಹವ್ಯಾಸಕ್ಕೆ ಉತ್ತಮ ಅವಕಾಶಗಳಾದವು. ಹೀಗಾಗಿ ಶಿವಮೊಗ್ಗದ ಸುಪ್ರಸಿದ್ಧ ಚಿತ್ರಕಲಾವಿದರಾಗಿ “ ವರ್ಣಬ್ರಹ್ಮ” ಎಂಬ ಖ್ಯಾತಿಯ ಶ್ರೀ ಎಸ್.ಆರ್.ವೆಂಕಟೇಶ್ ರವರ  ಚಿತ್ರಕಲಾಭ್ಯಾಸಕ್ಕೆ  ಮಾರ್ಗದರ್ಶನಗಳಾದವು. ಕಲಾಅಭ್ಯಾಸಗಳು ನಿರಂತರಗೊಂಡು ಇವರಲ್ಲಿನ ಚಿತ್ರಕಲಾ ನೈಪುಣ್ಯತೆಯು ಅಭಿವ್ಯಕ್ತಿಗೊಂಡು ಪೂರ್ಣಮಟ್ಟದಲ್ಲಿ ಅನಾವರಣಗೊಳಿಸಿದವು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ “ಜಕಣಾಚಾರಿ ಪ್ರಶಸ್ತಿ” ಪುರಸ್ಕøತರಾದ ಖ್ಯಾತಿಯ ಮಹಾಶಿಲ್ಪಿ ಶ್ರೀ ಕಾಶೀನಾಥ್ ರವರ ನಿಕಟತೆ ಹಾಗೂ ಗುರುಬಾಂಧವ್ಯವು ಇವರನ್ನು ಶಿಲ್ಪಕಲಾವಿದರನ್ನಾಗಿಯೂ ರೂಪಿಸಿತು. ಹಂಪ